ಪಂಢರಾಪುರ ಪಾದಯಾತ್ರೆ ಹೊರಟಿದ್ದವರ ಮೇಲೆ ಹರಿದ ಕಾರು : 6 ಭಕ್ತರಿಗೆ ಗಾಯ

khushihost
ಪಂಢರಾಪುರ ಪಾದಯಾತ್ರೆ ಹೊರಟಿದ್ದವರ ಮೇಲೆ ಹರಿದ ಕಾರು : 6 ಭಕ್ತರಿಗೆ ಗಾಯ

ಬೆಳಗಾವಿ: ಪಂಢರಾಪುರಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಶುಕ್ರವಾರ ಬೆಳಿಗ್ಗೆ  ಕಾರು ಹರಿದ ಪರಿಣಾಮ ಆರು ಭಕ್ತರು ಗಾಯಗೊಂಡಿದ್ದಾರೆ.

ರಾಯಬಾಗ ತಾಲೂಕು ಹಿಡಕಲ್ ಮೂಲದ ಭಕ್ತರು ಅಥಣಿ ಮಾರ್ಗವಾಗಿ ಪಾದಯಾತ್ರೆ ಹೊರಟಿದ್ದರು. ಆ ಸಂದರ್ಭದಲ್ಲಿ ಕಾರು ಚಾಲಕನ ಬೇಜವಾಬ್ದಾರಿಯಿಂದ ಭಕ್ತರ ಮೇಲೆ ಕಾರು ಹರಿದಿದೆ ಎನ್ನಲಾಗಿದೆ.

ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

Share This Article