ನಮ್ಮ ತೆರಿಗೆ ದುಡ್ಡಲ್ಲಿ ಉತ್ತರ ಪ್ರದೇಶ ಜನರ ಬದುಕು: ತಮಿಳುನಾಡು ಸಚಿವ

khushihost
ನಮ್ಮ ತೆರಿಗೆ ದುಡ್ಡಲ್ಲಿ ಉತ್ತರ ಪ್ರದೇಶ ಜನರ ಬದುಕು: ತಮಿಳುನಾಡು ಸಚಿವ

ಚೆನ್ನೈ: ತಮಿಳುನಾಡು ತೆರಿಗೆ ರೂಪದಲ್ಲಿ ಕೇಂದ್ರ ಸರಕಾರ‌ಕ್ಕೆ ನೀಡುತ್ತಿರುವ ಹಣದಲ್ಲೇ ಉತ್ತರ ಪ್ರದೇಶ ಜೀವಿಸುತ್ತಿದೆ ಎಂದು ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಹೇಳಿದ್ದಾರೆ. ಪಿಎಂಕೆ ನಾಯಕ ಅನ್ಬುಮಣಿ ರಾಮ­ದಾಸ್‌ “ತಮಿಳುನಾಡಿಗಿಂತ ಉತ್ತರ ಪ್ರದೇಶ ಹೆಚ್ಚು ಅಭಿವೃದ್ಧಿ ಹೊಂದಿದೆ’ ಎಂದು ಈ ಹಿಂದೆ ಹೇಳಿದ್ದರು.

ಈ ಸಂಬಂಧ ರಾಜಾ ಅವರನ್ನು ಸುದ್ದಿಗಾ­ರರು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಾಜಾ, “ಉತ್ತರ ಪ್ರದೇಶಕ್ಕೆ ಎಲ್ಲಿಂದ ಹಣ ಬರುತ್ತಿದೆ? ಇದು ಆಂತರಿಕ ಅಭಿವೃ­ದ್ಧಿಯೇ?’ ಎಂದಿದ್ದಾರೆ. ಜತೆಗೆ ಉತ್ತರ ಭಾರತದ ಮಹಿಳೆಯರ ಗುರುತು ಆಕೆಯ ಪತಿಯ ಉದ್ಯೋಗದಿಂದ ಆಗುತ್ತದೆ. ಆದರೆ ತಮಿಳುನಾಡಿನಲ್ಲಿ ಆಕೆಯ ವಿದ್ಯಾಭ್ಯಾಸದಿಂದ ಆಗುತ್ತದೆ’ ಎಂದಿದ್ದಾರೆ.

Share This Article