ಡೋಣಿ ನದಿ ಪ್ರವಾಹ: ಸೇತುವೆಗಳು ಜಲಾವೃತ

khushihost
ಡೋಣಿ ನದಿ ಪ್ರವಾಹ: ಸೇತುವೆಗಳು ಜಲಾವೃತ

ವಿಜಯಪುರ : ಭಾರೀ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಡೋಣಿ ನದಿ ಪ್ರವಾಹದಿಂದ ಸೇತುವೆಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿದೆ.

ಡೋಣಿ ನದಿ ಪ್ರವಾಹದಿಂದ ತಾಳಿಕೋಟೆಯ ಹಳೇ ಸೇತುವೆ ಮೇಲೆ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಇದೀಗ ಹಳೇ ಸೇತುವೆಯೂ ಜಲಾವೃತ ಹಿನ್ನೆಲೆಯಲ್ಲಿ ಮನಗೂಳಿ-ದೇವಾವುರು ಹೆದ್ದಾರಿಯಲ್ಲಿ ಸಂಚಾರ ಬಂದ್ ಮಾಡಲಾಗಿದೆ.

ಡೋಣಿ ನದಿ ಪ್ರವಾಹದಿಂದ ವಿಜಯಪುರ-ತಾಳಿಕೋಟೆ, ಯಾದಗಿರಿ-ರಾಯಚೂರು ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದೆ.

Share This Article