ಮಾವನನ್ನೇ ಕೊಂದ ಸೊಸೆಯ ಬಂಧನ

khushihost
ಮಾವನನ್ನೇ ಕೊಂದ ಸೊಸೆಯ ಬಂಧನ

ದಾವಣಗೆರೆ: ಕೌಟುಂಬಿಕ ಕಲಹದಿಂದ ಮಾವನನ್ನು ಸೊಸೆ ಕೊಲೆ ಮಾಡಿದ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಹರಿಹರ ನಗರದ ವಿದ್ಯಾನಗರ ಬಡಾವಣೆಯಲ್ಲಿ ಘಟನೆ ನಡೆದಿದ್ದು ಪಿ. ಶಿವಕುಮಾರ(70) ಮೃತಪಟ್ಟವರು ಎಂದು ಹೇಳಲಾಗಿದೆ.

ಕೊಲೆ ಮಾಡಿದ ಸೊಸೆ ಬಿ.ಎಂ. ಜ್ಯೋತಿ(28) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹರಿಹರದ ಕಾರ್ಗಿಲ್ ಕಂಪನಿ ಉದ್ಯೋಗಿ ವೀರೇಶ ಪತ್ನಿ ಜ್ಯೋತಿ ಕೌಟುಂಬಿಕ ಕಲಹದಿಂದ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article