ಬೊಮ್ಮಾಯಿ ಮತದಾರ ಪಟ್ಟಿ ಅಕ್ರಮದ ರೂವಾರಿ : ಸಿದ್ದರಾಮಯ್ಯ 

khushihost
ಬೊಮ್ಮಾಯಿ ಮತದಾರ ಪಟ್ಟಿ ಅಕ್ರಮದ ರೂವಾರಿ : ಸಿದ್ದರಾಮಯ್ಯ 

ಮೈಸೂರು: ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿರುವಂತ ಅಕ್ರಮದ ರೂವಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಲುಮೆ ಸಂಸ್ಥೆಗೆ ನಮ್ಮ ಆಡಳಿತದಲ್ಲಿಯೇ ಮತದಾರರ ಪಟ್ಟಿ ಬಗ್ಗೆ ಅನುಮತಿ ನೀಡಲಾಗಿತ್ತು ಎಂದು ಬಿಜೆಪಿಯವರು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ನಮ್ಮ ಆಡಳಿತದಲ್ಲಿ ನೀಡಿದ್ದರೇ ಆಗ ಯಾಕೆ ಮಾತನಾಡಲಿಲ್ಲ. ನಿಮಗೇನು ಬಾಯಿ ಇರಲಿಲ್ಲವಾ ಎಂದು ಪ್ರಶ್ನಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಅಕ್ರಮದ ಹಿಂದಿನ ರೂಪಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಿದ್ದಾರೆ. ಇದೊಂದು ಬಹು ದೊಡ್ಡ ಮಟ್ಟದ ವಂಚನೆಯಾಗಿದೆ. ಈ ಬಗ್ಗೆ ಉಚ್ಛ ನ್ಯಾಯಾಲಯ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Share This Article