ಬೊಮ್ಮಾಯಿ ಆರ್​ಎಸ್​ಎಸ್​​ ಕೈಗೊಂಬೆ : ಸಿದ್ದರಾಮಯ್ಯ 

khushihost
ಬೊಮ್ಮಾಯಿ ಆರ್​ಎಸ್​ಎಸ್​​ ಕೈಗೊಂಬೆ : ಸಿದ್ದರಾಮಯ್ಯ 

ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್​ಎಸ್​ಎಸ್​​ ಕೈಗೊಂಬೆಯಾಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಯಚೂರಿನಲ್ಲಿ ನಡೆದ ಭಾರತ​ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರೆಲ್ಲರೂ ಮಾತೆತ್ತಿದರೆ ನನ್ನನ್ನೇ ಬೈಯುತ್ತಾರೆ. ಬಿಜೆಪಿ ನಾಯಕರಿಗೆ ನನ್ನನ್ನು ಕಂಡರೆ ಎಷ್ಟು ಭಯ ಇದೆ ನೋಡಿ. ಯಾಕೆಂದರೆ ಆರ್​ಎಸ್​ಎಸ್​ ಮತ್ತು ಮೋದಿ ಬಗ್ಗೆ ಮಾತನಾಡೋದು ನಾನೊಬ್ಬನೇ ಎಂದು ಹೇಳಿದರು.

ಸಂಸದ ಅನಂತಕುಮಾರ​ ಹೆಗಡೆಗೆ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಯೋಗ್ಯತೆ ಇಲ್ಲ. ಅಂಬೇಡ್ಕರ​ ಬರೆದ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ ಶಾ ಮಾತು ಕೇಳಿ ಈ ಹೇಳಿಕೆ ನೀಡಿದ್ದಾನೆ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

Share This Article