ವಿಜಯಪುರದಲ್ಲಿ ಬುಲ್ ಡೋಜರ್ ಘರ್ಜನೆ; ಕಟ್ಟಡಗಳು ನೆಲಸಮ

khushihost
ವಿಜಯಪುರದಲ್ಲಿ ಬುಲ್ ಡೋಜರ್ ಘರ್ಜನೆ; ಕಟ್ಟಡಗಳು ನೆಲಸಮ

ವಿಜಯಪುರ : ವಿಜಯಪುರ ನಗರದಲ್ಲಿ ಇಕ್ಕಟ್ಟಾದ ರಸ್ತೆಗಳ ವಿಸ್ತರಿಸಲು ರೂಪಿಸಿರುವ ಮಾಸ್ಟರ್ ಪ್ಲಾನ್ ಅನ್ವಯ ಮುರಾಣಕೇರಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳ ತೆರವು ಕಾರ್ಯಾಚರಣೆ ಸೋಮವಾರ ನಡೆಸಲಾಗಿದೆ ಎಂದು ಹೇಳಲಾಗಿದೆ.

ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಮೇಲ್ವಿಚಾರಣೆಯಲ್ಲಿ ಮನೆಗಳನ್ನು ಜೆಸಿಬಿ ಕಾರ್ಯಾಚರಣೆ ನಡೆಸಿ ನೆಲಸಮ ಮಾಡಲಾಯಿತು. ಮಹಾನಗರಪಾಲಿಕೆ ವತಿಯಿಂದ ಮನೆಗಳ ಮಾಲೀಕರಿಗೆ ನೋಟೀಸ್ ನೀಡಲಾಗಿತ್ತು. ಅದರಂತೆ ಮಾಲೀಕರು ಮನೆ ಖಾಲಿ ಮಾಡಿದ್ದರು. ಅದಕ್ಕಾಗಿ ಮನೆ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ಪತ್ರಕರ್ತರಿಗೆ ತಿಳಿಸಲಾಗಿದೆ.

ಈ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಗೋಳಗುಮ್ಮಟ ಪೊಲೀಸರು ಬಂದೋಬಸ್ತ ಕೈಗೊಂಡಿದ್ದರು. ಅಭಿವೃದ್ಧಿ ಕಾಮಗಾರಿಗಳು ಹಿನ್ನೆಲೆ ಅತಿಕ್ರಮಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲಾಯಿತು ಎಂದು ಹೇಳಲಾಗಿದೆ.

Share This Article