ಈಗ ಸಚಿವರ ಭಾವಚಿತ್ರದ ಕ್ಯೂಆರ್​ ಕೋಡ್ ಬಿಡುಗಡೆ​  

khushihost
ಈಗ ಸಚಿವರ ಭಾವಚಿತ್ರದ ಕ್ಯೂಆರ್​ ಕೋಡ್ ಬಿಡುಗಡೆ​  

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೇ ಸಿಎಂ ಎಂದು ಪೋಸ್ಟರ್​ ತಯಾರಿಸಿ ಕಾಂಗ್ರೆಸ್ ಬೆಂಗಳೂರಿನ ಗೋಡೆಗಳಿಗೆ ಅಂಟಿಸಿದ್ದರು.

ಈಗ ಕಾಂಗ್ರೆಸ್ ಮುಂದುವರೆದು ಪೇ ಸಿಎಂ ತರಹ ಸಚಿವರಾದ ಅಶ್ವತ್ಥ ನಾರಾಯಣ, ಡಾ. ಕೆ ಸುಧಾಕರ, ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕ್ಯೂಆರ್​ ಕೋಡ್ ಬಿಡುಗಡೆ ಮಾಡಿದೆ. ಪೇ ಸಿಎಂ ಪೋಸ್ಟರ್​​ನಲ್ಲೇ ಸಚಿವರ ಭಾವಚಿತ್ರದ ಕ್ಯೂಆರ್​ ಕೋಡ್​ಗಳನ್ನು ಬಿಡುಗಡೆ​ ಮಾಡಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರ ವಿಚರವಾಗಿ ಕೆಸರೆಚಾಟ ಶುರುಹಚ್ಚಿಕೊಂಡಿವೆ. ಕಾಂಗ್ರೆಸ್ ಪೇಸಿಎಂ ಅಭಿಯಾನ ಪ್ರಾರಂಭಿಸಿದಾಗಿನಿಂದಲು ಬಿಜೆಪಿ ಸಂಕಟ ಶುರುವಾಗಿದೆ.

Share This Article