ಕಾರವಾರದಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ಬಂತು ಪೆಟ್ರೋಲ್

khushihost
ಕಾರವಾರದಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ಬಂತು ಪೆಟ್ರೋಲ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಮಠಾಕೇರಿಯ ಕ್ರಾಸ್ ಸಮೀಪ ಕುಡಿಯುವ ನೀರಿನ ಎರಡು ಬಾವಿಗಳಲ್ಲಿ ಪೆಟ್ರೋಲ್ ಪತ್ತೆಯಾಗಿದೆ.

ಮಠಾಕೇರಿಯ ಗಣಪತಿ ಕಿಣಿ ಮತ್ತು ಸಂತೋಷ ನಾಯ್ಕ ಅವರ ಮಾಲೀಕತ್ವದ ಎರಡು ಬಾವಿಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯುತ್ತಿತ್ತು. ಆದರೆ, ಕಳೆದ ಮೂರು- ನಾಲ್ಕು ದಿನಗಳಿಂದ ಪೆಟ್ರೋಲ್ ವಾಸನೆ ಬರಲಾರಂಭಿಸಿದೆ. ಈ ಕುರಿತು ಬಾವಿ ಮಾಲೀಕರು ಪುರಸಭೆಗೆ ದೂರು ನೀಡಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಮೀಪದ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ಸೇರಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share This Article