ದಮ್ ಯಾರಿಗೆ ಇದೆ ಅಂತಾ ಜನ ತೀರ್ಮಾನಿಸುತ್ತಾರೆ : ಸಿದ್ದರಾಮಯ್ಯ

khushihost
ದಮ್ ಯಾರಿಗೆ ಇದೆ ಅಂತಾ ಜನ ತೀರ್ಮಾನಿಸುತ್ತಾರೆ : ಸಿದ್ದರಾಮಯ್ಯ

ಬಾಗಲಕೋಟ : ರಾಜ್ಯದ 18 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿದ್ದಾರೆ. ಈ ವರೆಗೂ ಯಾವುದೇ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಾದಾಮಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ನೆರೆಯಿಂದ ಸಂಕಷ್ಟದಲ್ಲಿದ್ದಾರೆ. ಜನರಿಗೆ ಸ್ಪಂದಿಸಿದರೆ ಅಲ್ವಾ ಜನಸ್ಪಂದನೆ. ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರಾ? ಸಚಿವರು ಕೇವಲ ಧ್ವಜಾರೋಹಣ ಮಾಡಲಷ್ಟೇ ಸೀಮಿತ ಎಂದು ಕಿಡಿಕಾರಿದ್ದಾರೆ.

ಜನರು ಈಗಾಗಲೇ ಅವರ ದಮ್ ನೋಡಿದ್ದಾರೆ. ಖಾಲಿ ಕುರ್ಚಿ ಎದುರು ವೀರಾವೇಶದಿಂದ ಮಾತನಾಡಿದ್ದಾರೆ. ನಿನ್ನೆ ಎಲ್ಲರೂ ನನ್ನ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ನನ್ನ ಮೇಲಿನ ಭಯದಿಂದ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ.

ಯಾರು ಅಧಿಕಾರಕ್ಕೆ ಬರಬೇಕು ಎಂಬುದು ಜನರು ನಿರ್ಧರಿಸುತ್ತಾರೆ. ದಮ್, ತಾಕತ್ತು ಯಾರಿಗೆ ಇದೆ ಎಂದು ಜನರು ತೀರ್ಮಾನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Share This Article