ಕಬ್ಬು ಬೆಳೆಗೆ ಹಾನಿ : ಅರಣ್ಯಾಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ವಿಠ್ಠಲ ಹಲಗೇಕರ

khushihost
ಕಬ್ಬು ಬೆಳೆಗೆ ಹಾನಿ : ಅರಣ್ಯಾಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ವಿಠ್ಠಲ ಹಲಗೇಕರ

ಖಾನಾಪುರ : ನಂದಗಡ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆಗಳನ್ನು ಕಾಡುಪ್ರಾಣಿಗಳು ಹಾನಿಗೊಳಿಸಿದ ಹಿನ್ನೆಲೆಯಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಾನಿಗೊಳಗಾದ ರೈತರಿಗೆ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಭೇಟಿ ವೇಳೆ ಖಾನಾಪುರ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ, ನಂದಗಡ ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮದ ರೈತರು ಮಹದೇವ ಕರವಿನಕೊಪ್ಪ, ಬಾಳು ಪಾಟೀಲ್, ದಿಲೀಪ ಗುಂಡಣಿ, ರಾಜು ಪಾಟೀಲ್, ಪ್ರಶಾಂತ ಲಕೇಬೈಲ್ಕರ, ಯಲ್ಲಪ್ಪ ಗುರವ, ತೋಕಾರಾಮ್ ಗೌಡ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Share This Article